About: http://data.cimple.eu/claim-review/6a2b7c30788792889c80c405f331c4a043b928418074171ae8b46b44     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check Contact Us: checkthis@newschecker.in Fact checks doneFOLLOW US Fact Check Claim ರಾಮನವಮಿ ದಿನವೇ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮಾಂಸಾಹಾರ ಊಟ ಮಾಡಿದ್ದಾರೆ Fact ಮಾಂಸಾಹಾರ ಸೇವಿಸಿದ್ದಾರೆ ಎನ್ನುವ ಹೇಳಿಕೆ ಸುಳ್ಳು ನಾಗ್ಪುರ ಜಿಲ್ಲೆಯ ಉಮ್ರೆಡ್ ನಲ್ಲಿ ಏಪ್ರಿಲ್ 17ರ ರಾಮನವಮಿಯಂದು ಸ್ಥಳೀಯ ಮಹಿಳೆಯೊಬ್ಬರು ತಯಾರಿಸಿದ ಸಸ್ಯಾಹಾರಿ ಖಾದ್ಯವನ್ನು ಅವರು ಸವಿದಿದ್ದರು ರಾಮ ನವಮಿ ದಿನವೇ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಥೆ ಮಾಂಸಾಹಾರ ಊಟ ಮಾಡಿದ್ದಾರೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ರಾಮ ರಾಮ !! ರಾಮನವಮಿ ದಿವಸ ನಮ್ಮ ಕರ್ನಾಟಕದ “ರಾಮಯ್ಯ”ನವರ ಕಾಂಗ್ರೆಸ್ ಸರ್ಕಾರ ಮಾಂಸ ಮಾರಾಟವನ್ನು ನಿಷೇಧ ಮಾಡಿದರೆ, ಪಕ್ಕದ ರಾಜ್ಯ ಮಹಾರಾಷ್ಟ್ರ ದ ಸಿಎಂ ಶಿಂಧೆ ಅವರು ಮಾತ್ರ #ಬಾಡೇನಮ್ಮಗಾಡು ಅನ್ನುತ್ತಿದ್ದಾರೆ. ನಾಟಕ ಮಾಡುವ ಭಕ್ತರು ಹಾಗೂ ಮೋದಿ ಈಗ ಎರಡೂ ಕೈಯಲ್ಲಿ ಬಾಯಿ ಬಡಿದುಕೊಳ್ಳಬೇಕು.” ಎಂದಿದೆ. Also Read: ರಾಹುಲ್ ಗಾಂಧಿಯನ್ನು ನೋಡಲು ಜನಸಾಗರ ಎಂದು ಚಿಕ್ಕೋಡಿ ಎತ್ತಿನ ಗಾಡಿ ಸ್ಪರ್ಧೆಯ ವೀಡಿಯೋ ಹಂಚಿಕೆ ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ತಿಳಿದುಕೊಂಡಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಮನವಮಿಯಂದು ಮಾಂಸ ಸೇವಿಸಿದ್ದಾರೆ ಎಂದು ಹೇಳಿದ್ದನ್ನು ಪರಿಶೀಲಿಸಲು ನಾವು ಮೊದಲು ಫೋಟೋವನ್ನು ಪರಿಶೀಲಿಸಿದ್ದೇವೆ. ಬ್ಲಾಗರ್ ಕಾಮಿಯಾ ಜಾನಿ ಅವರು ಮುಖ್ಯಮಂತ್ರಿಯೊಂದಿಗೆ ಕುಳಿತಿರುವುದನ್ನು ಗಮನಿಸಿದ್ದೇವೆ. ಏತನ್ಮಧ್ಯೆ, ಫೋಟೋದ ಮುಖ್ಯ ಮೂಲವನ್ನು ಕಂಡುಹಿಡಿಯಲು ನಿರ್ಧರಿಸಿ, ನಾವು ಸಂಬಂಧಿತ ಫೋಟೋವನ್ನು ಗೂಗಲ್ನಲ್ಲಿ ರಿವರ್ಸ್ ಸರ್ಚ್ ಮಾಡಿದ್ದೇವೆ. ಆದರೆ ಫೋಟೋದ ಮೂಲವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಅದೇ ಫೋಟೋವನ್ನು ಬಳಸಿಕೊಂಡು, ವಿವಿಧ ಭಾಷೆಗಳಲ್ಲಿ ಅನೇಕ ಬಳಕೆದಾರರು ಮಾಡಿದ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಗಳು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಯಾವುದೇ ಮಾಹಿತಿ ನೀಡಿದ್ದಾರೆಯೇ? ಎಂದು ನೋಡಿದ್ದೇವೆ. ಆದರೆ ಈ ಬಗ್ಗೆ ಯಾವುದೇ ಉಲ್ಲೇಖವನ್ನು ನಾವು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಚಿತ್ರದಲ್ಲಿ ಕಾಣಿಸಿಕೊಂಡಿರುವ ಕಾಮಿಯಾ ಜಾನಿ ಅವರು ಶಿಂಧೆ ಅವರೊಂದಿಗೆ ಆಹಾರ ಸೇವಿಸಿದ ಬಗ್ಗೆ ಬಗ್ಗೆ ಏನಾದರೂ ಪೋಸ್ಟ್ ಮಾಡಿದ್ದಾರೆಯೇ? ಇದನ್ನು ನೋಡಲು, ನಾವು ಅವರ ಎಕ್ಸ್ ಮತ್ತು ವೈಯಕ್ತಿಕ ಇನ್ಸ್ಟಾಗ್ರಾಮ್, ಅವರ ಕರ್ಲಿ ಟೇಲ್ಸ್ ನ ಎಕ್ಸ್ ಇತ್ಯಾದಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹುಡುಕಿದ್ದೇವೆ. ಕರ್ಲಿ ಟೇಲ್ಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ಏಪ್ರಿಲ್ 18, 2024 ರಂದು ಪೋಸ್ಟ್ ಮಾಡಿದ ರೀಲ್ ಅನ್ನು ನಾವು ಕಂಡುಕೊಂಡಿದ್ದೇವೆ. ವೈರಲ್ ಫೋಟೋದಲ್ಲಿ ಇರುವ ರೀತಿಯ ಪರಿಸರವನ್ನು ನೋಡಿದ್ದೇವೆ. ಈ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ, “On the auspicious day of Ram Navami, I enjoyed a very hearty veg saoji meal with Maharashtra’s CM Shri Eknath Shinde. 📍Umred, Maharashtra Local women of the village prepared a very special veg saoji meal for us and it was super delicious. Stay tuned for the whole episode! (ಸಿಎಂ ಏಕನಾಥ್ ಶಿಂಧೆ ಅವರೊಂದಿಗೆ ಅಧಿಕೃತ ಸಸ್ಯಾಹಾರಿ ಸಾವೋಜಿ ಊಟ” ಎಂಬ ಶೀರ್ಷಿಕೆಯಡಿಯಲ್ಲಿ ರೀಲ್ ತಯಾರಿಸಲಾಗಿದೆ. ಈ ರೀಲ್ ಬಗ್ಗೆ ಮಾಹಿತಿ ನೀಡಿದ ಅವರು, “ರಾಮನವಮಿಯ ಶುಭ ದಿನದಂದು, ನಾನು ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಅವರೊಂದಿಗೆ ತುಂಬಾ ಹೃತ್ಪೂರ್ವಕ ಸಸ್ಯಾಹಾರಿ ಸಾವೋಜಿ ಊಟವನ್ನು ಆನಂದಿಸಿದೆ. ಹಳ್ಳಿಯ ಸ್ಥಳೀಯ ಮಹಿಳೆಯರು ನಮಗಾಗಿ ಬಹಳ ವಿಶೇಷವಾದ ಸಸ್ಯಾಹಾರಿ ಸಾವೋಜಿ ಊಟವನ್ನು ತಯಾರಿಸಿದರು ಮತ್ತು ಅದು ತುಂಬಾ ರುಚಿಕರವಾಗಿತ್ತು. ಇಡೀ ಎಪಿಸೋಡ್ಗಾಗಿ ಕಾಯಿರಿ!”) ಎಂದಿದೆ. ಕರ್ಲಿ ಟೇಲ್ಸ್ ನ ಕಾಮಿಯಾ ಜಾನಿ ಅವರು ಇದೇ ರೀತಿ ಸೆಲೆಬ್ರಿಟಿಗಳು ಮತ್ತು ರಾಜಕೀಯ ವ್ಯಕ್ತಿಗಳೊಂದಿಗೆ ಆಹಾರ ಸ್ವೀಕರಿಸುತ್ತಾರೆ. ಅವರೊಂದಿಗೆ ಮಾತುಕತೆಯನ್ನೂ ನಡೆಸುತ್ತಾರೆ. ಮೊದಲಿಗೆ, ಕಾರ್ಯಕ್ರಮದ ಟೀಸರ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಬಳಿಕ ಅವರು ಇಡೀ ಎಪಿಸೋಡ್ ಅನ್ನು ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡುತ್ತಾರೆ. ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ನಾಗ್ಪುರ ಜಿಲ್ಲೆಗೆ ಬಂದ ಮುಖ್ಯಮಂತ್ರಿಯೊಂದಿಗೆ ಇದೇ ರೀತಿಯ ಕಾರ್ಯಕ್ರಮ ನಡೆದಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಮಾಹಿತಿ ನೀಡುವಾಗ, ಅವರು ಶುದ್ಧ ರುಚಿಕರವಾದ ಆಹಾರ ಎಂಬುದನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ಇದರ ವೀಡಿಯೋ ಕೂಡ ಇದೆ. ಈ ಆಹಾರಗಳ ಹೆಸರುಗಳು ಯಾವುವು? ಎಂಬ ಪ್ರಶ್ನೆಗೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬದನೆಕಾಯಿ ಭರಿತ್, ಬದನೆಕಾಯಿ ಭಾಜಿ, ಪಟೋಡಿ ಮುಂತಾದ ಸಸ್ಯಾಹಾರಿ ಭಕ್ಷ್ಯಗಳ ಹೆಸರುಗಳನ್ನು ಉಲ್ಲೇಖಿಸುವುದನ್ನು ಕಾಣಬಹುದು. ರಾಮನವಮಿಯಂದು ಏಕನಾಥ ಶಿಂಧೆ ಅವರು ಮಾಂಸ ತಿಂದಿದ್ದಾರೆ ಎನ್ನುವ ಹೇಳಿಕೆ ಸುಳ್ಳು ಎಂಬುದನ್ನು ಇದು ತೋರಿಸಿದೆ. ರಾಮ ನವಮಿ ದಿನವೇ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಥೆ ಮಾಂಸಾಹಾರ ಊಟ ಮಾಡಿದ್ದಾರೆ ಎಂದು ಹೇಳಿಕೆ ಸುಳ್ಳು ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ನಾಗ್ಪುರ ಜಿಲ್ಲೆಯ ಉಮ್ರೆಡ್ ನಲ್ಲಿ ಏಪ್ರಿಲ್ 17ರ ರಾಮನವಮಿಯಂದು ಸ್ಥಳೀಯ ಮಹಿಳೆಯೊಬ್ಬರು ತಯಾರಿಸಿದ ಸಸ್ಯಾಹಾರಿ ಖಾದ್ಯವನ್ನು ಅವರು ಸವಿದಿದ್ದರು. Our Sources: Google Search Social Media Handles of CM Eknath Shinde Reel published by curly.tales, Dated: April 18, 2024 (ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಮರಾಠಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software